ಬ್ರೇಕಿಂಗ್
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
08 ಜುಲೈ 2026
ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ
📄 ರಾಷ್ಟ್ರೀಯ ಸುದ್ದಿ
Dr. K N Doddmani · · 45 ವೀಕ್ಷಣೆಗಳು

ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ

ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಮಾಜಿ ಸೈನಿಕರ ರಕ್ಷಣಾ ಭದ್ರತಾ ದಳ (ಡಿಎಸ್‌ಸಿ) ನೇಮಕಾತಿ ರ್ಯಾಲಿ ಪೂರ್ಣ

ಬೆಳಗಾವಿಯ ಮರಾಠಾ ಲಘು ಪದಾತಿ ದಳದ ರೆಜಿಮೆಂಟಲ್ ಸೆಂಟರ್ (ಎಮ್ ಎಲ್‌ಐಆರ್‌ಸಿ) ನಲ್ಲಿ ಇದೇ ದಿ. 15 ಮತ್ತು 16 ರಂದು ನಡೆದ ಮಾಜಿ ಸೈನಿಕರ ರಕ್ಷಣಾ ಭದ್ರತಾ ದಳ (ಡಿಎಸ್‌ಸಿ) ನೇಮಕಾತಿ ರ್ಯಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಮ್.ಎಲ್.ಐ.ಆರ್.ಸಿ ತಿಳಿಸಿದೆ.

ಮಾಜಿ ಸೈನಿಕರಿಗೆ ರಕ್ಷಣಾ ಭದ್ರತಾ ದಳಕ್ಕೆ ಮರು ನೋಂದಣಿ ಮೂಲಕ ರ ಸೇವೆ ಮುಂದುವರಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಗದಿತ ಅರ್ಹತಾ ಮಾನದಂಡಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳು ಕಣ್ಣೂರಿನ ರಕ್ಷಣಾ ಭದ್ರತಾ ದಳದ ಕೇಂದ್ರದಲ್ಲಿ ನಾಲ್ಕು ವಾರಗಳ ತರಬೇತಿ ನೀಡಿ ಸೇವಾ ಸಿದ್ಧತೆಗೊಳಿಸಲಾಗುತ್ತದೆ. ನಂತರ, ಅವರನ್ನು ದೇಶಾದ್ಯಂತ ಸಶಸ್ತ್ರ ಪಡೆಗಳ ವಿವಿಧ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ, ಪ್ರತಿ ಕೇಂದ್ರದಲ್ಲಿ ಎರಡು ವರ್ಷಗಳ ವರೆಗೆ ಸೇವಾವಧಿ ನಿಗಧಿಯಾಗಿರುತ್ತದೆ.

ರಕ್ಷಣಾ ಭದ್ರತಾ ದಳಕ್ಕೆ ಮರು ನೇಮಕ ಮಾಜಿ ಸೈನಿಕರಿಗೆ ವರ್ಧಿತ ಆರ್ಥಿಕ ಭದ್ರತೆ, ವೃತ್ತಿ ಪ್ರಗತಿಗೆ ಅವಕಾಶಗಳು, ಬಡ್ತಿಗಳಿಗೆ ಅರ್ಹತೆ ಮತ್ತು MACP ಪ್ರಯೋಜನಗಳು, ಜೊತೆಗೆ  ಸೇವೆಯಿಂದ ನಿವೃತ್ತಿಯಾದಾಗ  ದ್ವಿ ಪಿಂಚಣಿಯ ಪ್ರಯೋಜನ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ.  ಸ್ವಯಂ ಮತ್ತು ಅವಲಂಬಿತ ಕುಟುಂಬ ವರ್ಗಕ್ಕೆ ವೈದ್ಯಕೀಯ ಸೌಲಭ್ಯಗಳು, ರಜೆ ಅರ್ಹತೆಗಳು, ಪ್ರಯಾಣ ರಿಯಾಯಿತಿಗಳು, ವಸತಿ ಮತ್ತು ಪಡಿತರ ಭತ್ಯೆಗಳು, ಮಕ್ಕಳ ಶಿಕ್ಷಣ ಪ್ರಯೋಜನಗಳು, ವಿಮಾ ರಕ್ಷಣೆ ಮತ್ತು ಶಾಶ್ವತ ಆಯೋಗಕ್ಕೆ (ವಿಶೇಷ ಪಟ್ಟಿ) ಆಯ್ಕೆ ಸೇರಿದಂತೆ  ಸೇವಾ ಪ್ರಯೋಜನ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದು ಎಮ್ಎಲ್ ಐಆರ್ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ವಾಯುಪಡೆ ಅಗ್ನಿವೀರ  ನಿರ್ಗಮನ ಪಥ ಸಂಚಲನ; ಆಕರ್ಷಕ ವೈಮಾನಿಕ ಪ್ರದರ್ಶನ  ರಾಷ್ಟ್ರೀಯ ಸುದ್ದಿ

ವಾಯುಪಡೆ ಅಗ್ನಿವೀರ ನಿರ್ಗಮನ ಪಥ ಸಂಚಲನ; ಆಕರ್ಷಕ ವೈಮಾನಿಕ ಪ್ರದರ್ಶನ

ವಾಯುಪಡೆ ಅಗ್ನಿವೀರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಈ ಸಲ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಕುಶಾಲಾಗ್ರ ಸಾರಂಗ ಪೈಲಟ್ ತಂಡದಿಂದ ರೋಮಾಂಚಕಾರಿ ಹೆಲಿಕಾಪ್ಟರ್ ಪ್ರದರ್ಶನ ವಾಯುಪಡೆ ತರಬೇತಿ ಶಾಲೆಯ ಆವರಣದಲ್ಲಿ ಪ್ರದೇಶದಲ್ಲಿ ನಡೆಯಿತು. ಐದು ಹೆಲಿಕಾಪ್ಟರ್ ಗಳು ಸುಮಾರು 15 ನಿಮಿಷದ ವರೆಗೆ ನೀಡಿದ ಪ್ರದರ್ಶನ ರೋಮಾಂಚಕಾರಿಯಾಗಿತ್ತು.

Admin
6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ ರಾಷ್ಟ್ರೀಯ ಸುದ್ದಿ

6 ರಂದು ಸಾಂಬ್ರಾದಲ್ಲಿ ಸಾರಂಗ ಹೆಲಿಕಾಪ್ಟರ್ ತಂಡದಿಂದ ಆಕಾಶದಲ್ಲಿ ಆಕರ್ಷಕ ಚಿತ್ತಾರ

ವಾಯುಪಡೆಯ ಶಾಲೆಯಲ್ಲಿ ತರಬೇತಿ ಪಡೆದ 7ನೇ ತಂಡದ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚನ ನಿಮಿತ್ತ ಸಾರಂಗ ತಂಡದಿಂದ ಅತ್ಯಾಕರ್ಷಕ ಹೆಲಿಕಾಪ್ಟರ್ ಪ್ರದರ್ಶನ ಜರುಗಲಿದೆ

Admin