ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ
ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪದ ದಿವ್ಯ ಸನ್ನಿಧಿಗೆ ನಿನ್ನೆ ನಾನು ಭೇಟಿ ನೀಡಿದ್ದಾಗ ಮೂಡಿಬಂದ ಕಲ್ಪನಾ ಲೋಕದ ಸುಂದರ AI ಆಧಾರಿತ ರೇಖಾಚಿತ್ರಗಳು ಇಲ್ಲಿವೆ.
ಅಸ್ಮಿತೆ ವರದಿ, ಜು.07: ರಾಜ್ಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ಶರಣರು ಬದುಕಿ ಸಾಮಾಜಿಕ ಕ್ರಾಂತಿ ಮಾಡಿದ ಕೂಡಲಸಂಗಮದಿಂದ ರಾಜ್ಯದ ಪ್ರವಾಸ ಆರಂಭಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಭವ ಮಂಟಪದ ಶರಣರೊಂದಿಗಿನ ಕೃತಕ ಬುದ್ಧಿಮತ್ತೆಯಿಂದ ನಿರ್ಮಿತ ರೇಖಾ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಮಚಿಕೊಂಡಿದ್ದಾರೆ. ಆ ಮೂಲಕ ಶರಣರ ಸೈದ್ಧಾಂತಿಕ ನಿಲುವು ಅವರ ಸಾಮಾಜಿಕ ಹೋರಾಟದ ಬಗ್ಗೆ ತಮ್ಮನ್ನು ಸಮೀಕರಿಸಿ ತಮ್ಮ ಮುಂದಿನ ಕೆಲಸದ ಬಗ್ಗೆ ವಿಚಾರಗಳನ್ನು ನಿರೂಪಿಸಿದ್ದಾರೆ.
ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪದ ದಿವ್ಯ ಸನ್ನಿಧಿಗೆ ನಿನ್ನೆ ನಾನು ಭೇಟಿ ನೀಡಿದ್ದಾಗ ಮೂಡಿಬಂದ ಕಲ್ಪನಾ ಲೋಕದ ಸುಂದರ AI ಆಧಾರಿತ ರೇಖಾಚಿತ್ರಗಳು ಇಲ್ಲಿವೆ.

ಬಸವಣ್ಣನವರ ಕರುಣೆ, ಅಲ್ಲಮಪ್ರಭುಗಳ ಅದ್ವಿತೀಯ ಜ್ಞಾನಪ್ರಭೆ ಹಾಗೂ ಅಕ್ಕಮಹಾದೇವಿಯವರ ಅಪ್ರತಿಮ ಭಕ್ತಿಯ ಚೇತನಗಳು ಓಡಾಡಿದ ಬಸವಕಲ್ಯಾಣದ ಈ ಪವಿತ್ರ ಮಣ್ಣಿನಲ್ಲಿ ಹೆಜ್ಜೆಯಿಟ್ಟಾಗ ನನ್ನ ಮನಸಿಗೆ ದಕ್ಕಿದ ಧನ್ಯತೆಯೇ ಬೇರೆ. ಶರಣರ ವಚನಗಳ ಜ್ಞಾನದೀಪ್ತಿ ಇಂದಿಗೂ ಸಮಾಜದ ಕತ್ತಲೆಯನ್ನು ಸರಿಸಲು ನಮ್ಮೆಲ್ಲರಿಗೂ ದಾರಿದೀಪ.

ವೈಚಾರಿಕ ಕ್ರಾಂತಿ, ಸಮಾನತೆಯ ಮಂತ್ರ ಹಾಗೂ ಕಾಯಕವೇ ಕೈಲಾಸವೆಂಬ ಪರಮಸತ್ಯ ಮೊಳಗಿದ ಈ ಪುಣ್ಯಭೂಮಿಯಲ್ಲಿ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗುವ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಚೈತನ್ಯ ಸಿಕ್ಕಿದೆ. ಜನತೆಯ ಕಲ್ಯಾಣಕ್ಕಾಗಿ ಕಾಯಕದ ಹಾದಿಯಲ್ಲಿ ಮುನ್ನಡೆಯಲು ಬಸವಾದಿ ಶರಣರ ಆದರ್ಶಗಳು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿವೆ. ಭಕ್ತಿ, ಕಾಯಕ ಮತ್ತು ಸಮಾನತೆಯ ಈ ಮಹಾ ಚೇತನಗಳಿಗೆ ನನ್ನ ಕೋಟಿ ನಮನಗಳು ಎಂದು ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

ಈ ಲೇಖನ ಹಂಚಿಕೊಳ್ಳಿ