60 ಸಾವಿರ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮೂಲಕ ಪರ್ಯಾಯ ವ್ಯವಸ್ಥೆ : ಮುಖ್ಯಮಂತ್ರಿ
ಅಸ್ಮಿತೆ ವರದಿ, ಜು.10: ಬೆಂಗಳೂರಿನಲ್ಲಿ ತೆರವುಗೊಳಿಸಲಾಗುತ್ತಿರುವ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಿ, ಅವರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ತಳ್ಳುವ ಗಾಡಿ ಹಾಗೂ ದ್ವಿಚಕ್ರ ವಾಹನದ ಅನುಕೂಲತೆ ಕಲ್ಪಿಸಿ ರಸ್ತೆಯ ಒಂದು ಬದಿಯಲ್ಲಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನ್ಯಾಲಯಾದಯ ಆದೇಶದಂತೆ ಬೆಂಗಳೂರಿನ ಬೀದಿ ಬದಿಯ ವ್ಯಾಪಾರಸ್ಥರ ತೆರವು ಕಾರ್ಯಚರಣೆ ನಡೆಸಲಾಗುತ್ತಿದರ. ಈ ಬಗ್ಗೆ ಈ ಹಿಂದೆ ಬೆಂಗಳೂರಿನ ಎಲ್ಲ ಶಾಸಕರ ಸಭೆ ನಡೆಸಿ ತೀರ್ಮಣ ತೆಗೆದುಕೊಳ್ಳಲಾಗಿದೆ ಹೊರತು ಸಚಿವ ಕೃಷ್ಣ ಭೈರೆಗೌಡರ ಒಬ್ಬರ ನಿರ್ಧಾರವಲ್ಲ.ನ್ಯಾಯಾಲಯದ ಆದೇಶ ಪಾಲನೆಯ ಜೊತೆಗೆ ವ್ಯಾಪಾರಸ್ಥರ ಉಪಜೀವನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೀದಿ ಬದಿಯ ವ್ಯಾಪಾರಸ್ಥರ ಸರ್ವೆ ಮಾಡಿ ಒಟ್ಟು 60 ಸಾವಿರ ವ್ಯಾಪಾರಸ್ಥರನ್ನು ಗುರುತಿಸಲಾಗಿದೆ. ಈ ಪೈಕಿ 30 ಸಾವಿರ ವ್ಯಾಪಾರಸ್ಥರು ಗುರುತಿನ ಚೀಟಿಗೆ ಅರ್ಜಿಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ 30 ವ್ಯಾಪಾರಸ್ಥರಿಗೆ ದ್ವಿಚಕ್ರ ವಾಹನ, ತಳ್ಳುವ ಗಾಡಿಗಳನ್ನು ನೀಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಸಂಜೆ ವ್ಯಾಪಾರ ಮುಗಿದ ನಂತರ ಜಾಗೆ ಖಾಲಿ ಮಾಡಬೇಕಾಗುತ್ತದೆ. ಮುಖ್ಯ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ