ಬ್ರೇಕಿಂಗ್
ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
21 ಜೂನ್ 2026
ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ  ರೈತಾಪಿಗೆ ಮಾದರಿ ಪ್ರಯೋಗ
🌾 ಕೃಷಿ
Dr. K N Doddmani · · 68 ವೀಕ್ಷಣೆಗಳು

ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ ರೈತಾಪಿಗೆ ಮಾದರಿ ಪ್ರಯೋಗ

ಮಾದರಿ ಮಾವು ಬೆಳೆದ ತಜ್ಞ ವೈದ್ಯ ಡಾಕ್ಟರ್ ಸಮೀರ್ ನಾಯಿಕ ರೈತಾಪಿಗೆ ಮಾದರಿ ಪ್ರಯೋಗ

* ಇಸ್ರೇಲ್ ಮಾದರಿಯಲ್ಲಿ ಸ್ವಾದೀಷ್ಟ ವೈಶಾಲಿ ಕೇಸರ ಹಣ್ಣುಗಳು ಬಂಗಾರಗಿಂತ ಸುಂದರ

* ಹಣ್ಣಿಗೆ ಅಮ್ಮನ ಹೆಸರು - ವೈಶಾಲಿ ಕೇಸರ ಬ್ರ್ಯಾಂಡ್

* ಬೆಳಗಾವಿ ಸಮೀಪದ ನಂದಿಹಳ್ಳಿ ಗ್ರಾಮದ ಜಮೀನಿನಲ್ಲಿ‌ ಮಾವಿನ ನೂತನ ಪ್ರಯೋಗ

ಬೆಳಗಾವಿಯ ಡಾಕ್ಟ್ರ್ ಸಮೀರ ನಾಯಿಕ ಎಂಬುವರು ವೃತ್ತಿಯಲ್ಲಿ ಆರ್ಯುವೇಧಿಕ ತಜ್ಞ ವೈದ್ಯ ಹಾಗೂ ಪ್ರಾಧ್ಯಾಪಕರಾಗಿದ್ದರೂ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಆಧುನಿಕ ವ್ಯವಸಾಯಿ ಪದ್ಧತಿಯನ್ನು ಅನುಸರಿಸಿ ಬಂಗಾರಗಿಂತ ಸುಂದರವಾದ ಸ್ವಾದೀಷ್ಟದಿಂದ ಕೂಡಿದ ಕೇಸರ ಮಾದರಿ ಹಣ್ಣು ಬೆಳೆಯುವುದರ ಮೂಲಕ ಒಬ್ಬ ಮಾದರಿ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಳಗಾವಿಯ ಹೊರವಲಯದ ನಂದಿಹಳ್ಳಿ ಸಮೀಪ ತಮ್ಮ ಐದು ಏಕರೆ ಜಮೀನಲಿನ ನಾಲ್ಕು ಎಕರೆಯಲ್ಲಿ ೨೦೧೯ರಿಂದ ಸಮೃದ್ಧವಾದ ಮಾವು ಬೆಳೆದು ಇದುವರೆಗೆ ಉತ್ತಮ ಗುಣಮಟ್ಟದ ಮಾವುಗಳ ಮೂರು ಫಸಲು ಪಡೆದು ಲಾಭ ಪಡೆದಿದ್ದಾರೆ. ಡಾಕ್ಟರ್ ಸಮೀರ ಅವರು, ಸಾಂಪ್ರದಾಯಿಕ ಮಾವು ಬೆಳೆ ಪದ್ಧತಿಯನ್ನು ಅನುಸರಿಸದೆ ಆಧುನಿಕ ವೈಜ್ಞಾನಿಕ ರೀತಿಯನ್ನು ಅನುಸರಿಸಿ, ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪದ್ಧತಿಯನ್ನು ಅನುಸರಿಸಿ ಗಿಡಗಳಲ್ಲಿಯೇ ಮಾವುಗಳನ್ನು ಹಣ್ಣಾಗಿಸಿ ರಸಭರಿತ ಹಣ್ಣುಗಳ ಸೇವನೆಗೆ ಅವಕಾಶ ಕಲ್ಪಸಿದ್ದಾರೆ. ತಾವು ಬೆಳೆದ ಅತ್ಯಾಕರ್ಷಕ ಹಣ್ಣುಗಳಿಗೆ ತಮ್ಮ ತಾಯಿಯ ಹೆಸರು ವೈಶಾಲಿ ಎಂಬ ಹೆಸರಿನಿಂದ ಗುರುತಿಸಿ ವೈಶಾಲಿ ಬ್ಯಾçಂಡ್ ಮಾಡಿದ್ದಾರೆ.

ಮಾವು ಬೆಳೆಯ ವೈಜ್ಞಾನಿಕ ತಿಳುವಳಿಕೆ ಸಂಪಾಧಿಸಿಕೊAಡ ಸಮೀರ್ ನಾಯಿಕ ಅವರು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಹತ್ತಿರದ ಸಾಯಿ ಸಸಿಗಳ ಬೆಳೆವಣಿಗೆಯ ಕೇಂದ್ರದಿAದ ಸಸಿಗಳನ್ನು ತಂದು, ಗಿಡದಿಂದ ಗಿಡಕ್ಕೆ ೫ ಅಡಿ ಅಂತರ ಕಾಯ್ದುಕೊಂಡು, ಸಾಲದಿಂದ ಸಾಲಕ್ಕೆ ೧೨ ಅಡಿ ಅಂತರದಲ್ಲಿ ಎಕರೆಗೆ ೭೦೦ ಸಸಿಗಳನನ್ನು ನೆಟ್ಟು ಬೆಳೆಸಿದ್ದಾರೆ. ಮಧ್ಯಾಹ್ನದವರೆಗೆ ಪ್ರಾಧ್ಯಾಪಕ ವೃತ್ತಿ ನಿರ್ವಹಿಸಿ, ನಂತರ ಕತ್ತಲೆ ಆವರಿಸುವವರೆಗೆ ಕೃಷಿ ಕಾರ್ಮಿಕರೊಂದಿಗೆ ತಾವೂ ಬೆರೆತು ತುಂಬಾ ಆರೈಕೆಯಿಂದ ಕೃಷಿ ಕೆಲಸ ನಿರ್ವಹಿಸುವ ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಏಕಕಾಲದಕ್ಕೆ ೨ ಸಾವಿರ ೮೦೦ ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಗಿಡಗಳಲ್ಲಿ ಸುಮಾರು ೯೦ ಗ್ರಾಮದಷ್ಟು ಮಾವು ಬೆಳೆದಾಗ ಪ್ರತಿಯೊಂದು ಕಾಯಿಗೂ ಯಾವುದೇ ರೀತಿ ಕೀಟಬಾದೆ ಉಂಟಾಗಿ ಹಣ್ಣು ಕೆದಿರಲಿ ಎಂದು ಸುಮಾರು ೫೦ ರಿಂದ ೫೫ ದಿನಗಳ ವರೆಗೆ ಕಾಗದ ಚೀಲಗಳಿಂದ ಮುಚ್ಚಿ ಕಟ್ಟಲಾಗುತ್ತದೆ. ಮಾಗುವಿಕೆಯ ಕೊನೆ ಹಂತು ತಲುಪಿದಾಗ ಚೀಲ ತೆಗೆದು ಕಟಾವು ಮಾಡಿ ಕಾಗದಲ್ಲಿಯೇ ಆರೈಕೆಯಲ್ಲಿ ಬಾಕ್ಸ್ ಮಾಡಿ ರವಾನಿಸಲಾಗುತ್ತದೆ. ಹೀಗೆ ರವಾನಿಸಿದ ಹಣ್ಣುಗಳು ಎಂಟು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಹಣ್ಣಾಗಿ ಮತ್ತೆ ೧೦ ದಿನಗಳ ವರೆಗೆ ಬಾಳಿಕೆ ಬರುತ್ತವೆ. ನೋಡಲು ಬಂಗಾರಗಿAತಲೂ ಸುಂದರವಾದ ಸಮೀರ ನಾಯಿಕ ಅವರ ವೈಶಾಲಿ ಬ್ರಾö್ಯಂಡ್ ಮಾವು ಎಂಥವರ ಬಾಯಿಯಲ್ಲೂ ನೀರು ತರಿಸುತ್ತವೆ.

ಸಸಿಗಳನ್ನು ನೆಟ್ಟ ಮೂರನೇ ವರ್ಷದಲ್ಲಿ ಸುಮಾರು ಮೂರುವರೆ ಟನ್ ಬೆಳೆದು, ನಂತರ ೮ಟನ್, ಮೂರನೇ ಫಸಲು ೧೬ ಟನ್ ಮಾವು ಪಡೆದು ಈ ವರ್ಷ ಸುಮಾರು ೨೫ ಟನ್ ಫಲು ಪಡೆದುಕೊಂಡಿದ್ದಾರೆ. ಈ ವರ್ಷ ಸುಮಾರು ೧೦ ಲಕ್ಷ ರೂಪಾಯಿಗಳ ಬೆಳೆಗೆ ಖರ್ಚು ಮಾಡಿದ್ದು, ೨೫ ಲಕ್ಷ ರೂಪಾಯಿಗಳ ಆದಾಯ ನಿರೀಕ್ಷಿಸಿದ್ದಾರೆ. ಸುಮಾರು ೧೫ ಲಕ್ಷ ಲಾಭ ಈ ವರ್ಷ ಸಿಗಬಹುದು ಎನ್ನುತ್ತಾರೆ. ಮಾರಾಟಗಾರರೇ ಸ್ವತಃ ತೋಟಕ್ಕೆ ಆಗಮಿಸಿ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ವೈಶಾಲಿ ಬ್ರಾö್ಯಂಡ್ ಮಾವು ವಿದೇಶದಲ್ಲೂ ಸ್ವಾಧ ಪಡೆದುಕೊಂಡಿದೆ.

ಆಧುನಿಕ ಕೃಷಿ ಪದ್ಧತಿ ಅನುಸರಿಸಿ ರೈತ ಮಣ್ಣಲ್ಲಿ ಪ್ರೀತಿಯಿಂದ ದುಡಿದರೆ ಒಳ್ಳೆಯ ಲಾಭ ಪಡೆಯಬಹುದು ಎನ್ನುವುದಕ್ಕೆ ಡಾಕ್ಟರ್ ಸಮೀರ ನಾಯಿಕ ಮಾದರಿ ರೈತರಿಗೆ ನಿದರ್ಶನ ಒದಗಿಸಿದ್ದಾರೆ.

ಈ ಲೇಖನ ಹಂಚಿಕೊಳ್ಳಿ