ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ
ಅಸ್ಮಿತೆ ವರದಿ, ಅ.02: ರೈತರ ಹಿತದೃಷ್ಟಿಯಿಂದ ಕಾಲುವೆಯ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಯಾವುದೇ ರೀತಿಯ ನೀರಿನ ವ್ಯರ್ಥವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇಂದು ಹುಕ್ಕೇರಿ ತಾಲೂಕಿನ ಘೋಡಗೇರಿ ಸಮೀಪದ ಹಿರಣ್ಯಕೇಶಿ ನದಿಯಿಂದ ಜಿಆರ್ಬಿಸಿ (GRBC) ಕಾಲುವೆಗೆ ನೀರು ಎತ್ತುವ (ಲಿಫ್ಟ್) ಯೋಜನೆಯ ಪಂಪ್ ಹೌಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪಂಪ್ ಹೌಸ್ನ ಕಾರ್ಯನಿರ್ವಹಣೆ ಹಾಗೂ ನೀರು ಪೂರೈಕೆಗೆ ಸಂಬಂಧಿಸಿದ ತಾಂತ್ರಿಕ ಅಂಶಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ನೀರು ಪೋಲಾದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಬಳಿಕ ಘೋಡಗೇರಿ, ಮೇಲ್ಮಟ್ಟಿ, ಗೋಡಚಿನಮಲ್ಕಿ ಸೇರಿದಂತೆ ಜಿಆರ್ಬಿಸಿ ಕಾಲುವೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ, ಕಾಲುವೆಯ ದುರಸ್ತಿ ಕಾಮಗಾರಿಗಳು, ನೀರಿನ ಸೋರಿಕೆ (ಲೀಕೆಜ್) ಉಂಟಾಗಿರುವ ಸ್ಥಳಗಳು ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ಪರಿಶೀಲಿಸಿದರು.
***
ಈ ಲೇಖನ ಹಂಚಿಕೊಳ್ಳಿ