ವಿಭಿನ್ನ ನಾವಿನ್ಯತೆಗಳ ‘ಸೆಕೆಂಡ್ ವಿಷನ್ ಕರ್ನಾಟಕದ -೨೦೨೬’ ಅತ್ಯಾಕರ್ಷಣೆಗೆ ಹರಿದು ಬಂದ ವಿದ್ಯಾರ್ಥಿಗಳು
ವಿಭಿನ್ನ ನಾವಿನ್ಯತೆಗಳ ‘ಸೆಕೆಂಡ್ ವಿಷನ್ ಕರ್ನಾಟಕದ -೨೦೨೬’ ಅತ್ಯಾಕರ್ಷಣೆಗೆ ಹರಿದು ಬಂದ ವಿದ್ಯಾರ್ಥಿಗಳು
ನಾವೀನ್ಯತೆ
ದೆಹಲಿ ಮೂಲದ ‘ಪ್ರಯಾಸ್’ ಸಂಸ್ಥೆಯು ಸಂಸದ ಜಗದೀಶ ಶೆಟ್ಟರ ನೇತೃತ್ವದಲ್ಲಿ ಬೆಳಗಾವಿಯ ಕೆ.ಎಲ್.ಇ. ಕನ್ವೆನ್ಷನ್ ಕೇಂದ್ರದಲ್ಲಿ ಇಂದಿನಿAದ ಮೂರು ದಿನಗಳ ಕಾಲಾ ಆಯೋಜಿಸಲಾದ “ಸೆಕೆಂಡ್ ವಿಷನ್ ಕರ್ನಾಟಕ -೨೦೨೬” ಬೃಹತ್ ಪ್ರದರ್ಶನ ವಿಶೇಷ ಆಕರ್ಷಣೆಯಿಂದ ಕೂಡಿದ್ದು, ಸಾರ್ವಜನಿಕರು, ಶಿಕ್ಷಕರು, ಪ್ರಾಧ್ಯಾಪಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಹಲವಾರು ಆಧುನಿಕ ವಿಜ್ಞಾನ, ತಂತ್ರಜ್ಞಾನ ಆಧಾರಿತ ಪ್ರಗತಿಯನ್ನು ವೀಕ್ಷಿಸುತ್ತಿದ್ದಾರೆ.

ಮುಂಜಾನೆ ೧೦ ಗಂಟೆಗೆ ಸಂಜೆ ೫.೩೦ರವರೆಗೆ ವೀಕ್ಷಣೆಗೆ ಉಚಿವ ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಸರ್ಕಾರದ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಶೈಕ್ಷಣಿಕ ಹಾಗೂ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ವ್ಯವಹರಿಸಲು ನಾಗರಿಕರಿಗೆ ಒಂದು ಅನನ್ಯವಾದ ಅವಕಾಶ ಕಲ್ಪಿಸಲಾಗಿದೆ.

ರಕ್ಷಣೆ, ಕೃಷಿ, ಹಣಕಾಸು, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಕಾಶ ಕ್ಷೇತ್ರಗಳು, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ನಾವೀನ್ಯತೆಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಇಂದು ಮುಂಜಾನೆ ‘ಫ್ಯೂಚರ್ ಆಫ್ ಬೆಳಗಾವಿ@೨೦೪೭’ ಎಂಬ ವಿಶೇಷ ಮೇಗಾ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬೃಹತ್ ಪ್ರದರ್ಶನಕ್ಕೆ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ದೀನದಯಾಳ್ ಪೋರ್ಟ್ ಅಥಾಟಿ, ಯುನಿಯನ್ ಬ್ಯಾಂಕ್, ಎಲ್ಐಸಿ, ಎನ್ಐಸಿ ಸೇರಿದಂತೆ ಇಸ್ರೋ, ಸಿಎಸ್ಐಆರ್, ಐಸಿಎಆರ್, ಎನ್ಐಟಿಕೆ, ಐಸಿಎಂಆರ್ದAತಹ ಪ್ರತಿಷ್ಠಿತ ಸಂಸ್ಥೆಗಳು ಸಹಭಾಗೀತ್ವ ವಹಿಸಿವೆ.
ಇಂದು ಸಂಸದ ಜಗದೀಶ ಶೆಟ್ಟರ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಸಕ ಅಭಯ ಪಾಟೀಲ, ಮಹಾಪೌರ ಪ್ರೀತಿ ಕಾಮಕರ್, ಉಪಮಹಾಪೌರ ಹಣುಮಂತ ಕೊಂಗಾಲಿ, ಮಾಜಿ ಸಚೇತಕರ ಮಹಾಂತೇಶ ಕವಟಗಿಮಠ ಮಾಜಿಶಾಸಕ ಅನೀಲ್ ಬೆನಕೆ, ಪ್ರಯಾಸ್ನ ಮುಖ್ಯಸ್ಥ ವನೀಶ್ ಗುಪ್ತಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
**
ಈ ಲೇಖನ ಹಂಚಿಕೊಳ್ಳಿ