ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ ಔಷಧಿ ಹೊಸ ಪ್ರಯೋಗ
ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ
ಅಸ್ಮಿತೆ ವರದಿ, ಸೆ.೦೬: ಬೆಳಗಾವಿಯ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆ - ICMR ಮತ್ತು ಆಯುಷ್ ಇಲಾಖೆಯ ಸಹಯೋಗದಲ್ಲಿ ಇಂದು ಸಾಂಪ್ರದಾಯಿಕ ಔಷಧಿ ಹಾಗೂ ಆಧುನಿಕ ಔಷಧೀಯ ಸಂಯೋಗದ ಪ್ರಾಯೋಗಿಕ ಅನುಷ್ಠಾನದ ವೈಜ್ಞಾನಿಕ ಕ್ರಮ ಹಾಗೂ ಸಂಶೋಧನಾ ನೀತಿಗಳ ಬಲವರ್ಧನೆ ಕುರಿತು ಬೆಳಗಾವಿಯ ICMR ದಲ್ಲಿ ಇಂದು ರಾಷ್ಟ್ರೀಯ ಉನ್ನತ ಮಟ್ಟದ ಸಭೆ ನಡೆಸಲಾಯಿತು.
ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ ICMR ಮಹಾನಿರ್ದೇಶಕ ಡಾ. ರಾಜೀವ್ ಬಹಲ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೋಟೆಚಾ ಹಾಗೂ ಆಯುಷ್ ಸಚಿವಾಲಯ ಮತ್ತು ICMR ಸಂಸ್ಥೆಯ ಹಿರಿಯ ಅಧಿಕಾರಿಗಳು, ದೆಹಲಿ, ಚೆನೈ, ಪುಣೆ, ಗೋವಾ ಹಾಗೂ ಸ್ಥಳೀಯ ತಜ್ಞ ವೈದ್ಯರು ಪಾಲ್ಗೊಂಡಿದ್ದರು.

ಆಯುಷ್ ಮತ್ತು ಆಧುನಿಕ ಔಷಧೀಯ ಸಂಯೋಗದ ಪ್ರಾಯೋಗಿಕ ಬೆಳವಣಿಗೆ ಹಾಗೂ ಮುಂಬರುವ ದಿನಗಳಲ್ಲಿ ಸಮಗ್ರ ಔಷಧದ ಮಾದರಿಗಳ ಅಭಿವೃದ್ಧಿಪಡಿಸಲು ಕೊಡಬೇಕಾದ ಆದ್ಯತೆ ಹಾಗೂ ಈ ಹಿನ್ನೆಲೆಯಲ್ಲಿ ಕೈಗೊಳ್ಳುವ ಸಂಶೋಧನೆಯ ಸಾಧ್ಯತೆಗಳ ಇಡೀ ದಿನದ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು. ವಿಶೇಷವಾಗಿ ದೀರ್ಘಕಾಲದ ಕಾಯಿಲೆಗಳು, ಚಯಾಪಚಯ ಅಸ್ವಸ್ಥತೆಗಳು, ಮಸ್ಕ್ಯುಲೋಸ್ಕೆಲಿಟಲ್ ಅಸ್ವಸ್ಥತೆಗಳಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಔಷಧದಿಂದ ಕಂಡುಕೊಳ್ಳುಬಹುದಾದ ಪರಿಹಾರಗಳ ಬಗ್ಗೆ ಗಮನಹರಿಸಲಾಯಿತು.

ಇದಕ್ಕೆ ಪೂರಕವಾದ ಎರಡು ಯಾಪ್ ಗಳ ಬಿಡುಗಡೆ ಹಾಗೂ ಕೆಲ ಒಪ್ಪಂದದ ಒಡಬಂಡಿಕೆಗಳಿಗೆ ಪರಸ್ಪರ ಸಹಿ ಹಾಕಲಾಯಿತು.
ICMR ಮಹಾನಿರ್ದೇಶಕ ಡಾ. ರಾಜೀವ್ ಬಹಲ್ , ದೂರದರ್ಶನಕ್ಕೆ, ICMR ಸಹಯೋಗದಲ್ಲಿ ಕಳೆದ ಮೂರು ವರ್ಷಗಳಿಂದ ಆಯುಷ್ ಮತ್ತು ಆಧುನಿಕ ಔಷದೀಗಳ ಸಂಯೋಜಿತ ಪ್ರಾಯೋಗಿಕ ಯಶಸ್ವಿ ಪ್ರಕ್ರಿಯೆ ಪರಿಶೀಲನೆ ಹಾಗೂ ಔಷಧೀಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮ ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಗಂಭೀರವಾಗಿ ಇಂದು ಚರ್ಚಿಸಲಾಗಿದೆ. ಆರೋಗ್ಯ ಕಾಪಾಡುವಲ್ಲಿ ಆಯುಷ್ ಮತ್ತು ಆಧುನಿಕ ಔಷಧೀಯ ಪ್ರಾಯೋಗಿಕ ಪುರಾವೆಗಳ ಬಗ್ಗೆ ಪರಿಶೀಲಿಸಿ ಮುಂದಿನ ಮಾರ್ಗಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೋಟೆಚಾ ಅವರು, ಸಾಂಪ್ರದಾಯಿಕ ಔಷಧಿ ಮತ್ತು ಆಧುನಿಕ ಔಷಧೀಯ ಪ್ರಾಯೋಗಿಕ ಯಶಸ್ವಿಯನ್ನು ಭಾರತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗಲಾಗುವುದು. ಶುಂಠಿ, ಬ್ರಾಹ್ಮೀ, ಮೆಂತಿಕಾಳದಂತಹವುಗಳಿಂದ ಸಿದ್ಧಪಡೆಸಲಾದ ಸಾಂಪ್ರದಾಯಿಕ ಔಷಧಿ ಜಾಗತಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯ ಪ್ರಯೊಗ ಹಾಗೂ ಸಂಶೋಧನೆ ಹೊಸ ಭರವಸೆ ಮೂಡಿಸಿದೆ ಎಂದು ತಿಳಿಸಿದರು.
***
ಈ ಲೇಖನ ಹಂಚಿಕೊಳ್ಳಿ