ಮರಾಠಾ ಎಲ್ಐಆರ್ಸಿಯಲ್ಲಿ ಸಮಾಜ ಮತ್ತು ಸೈನಿಕರ ಸಂಬಂಧ ಬಲ ಪಡಿಸಿದ ರಕ್ಷಾ ಬಂಧನ
ಅಸ್ಮಿತೆ ವರದಿ, ಅ.೨೮: ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ -ಮರಾಠಾ ಲಘ ಪದಾತಿದಳ ರಕ್ಷಾ ಬಂಧನವನ್ನು ಗುರುವಾರದಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಶಸ್ತ್ರ ಪಡೆಯ ಯೋಧರು ದೇಶದ ಭದ್ರತೆ ಸಲ್ಲಿಸುವ ಅನುಪಮ ಸೇವೆಯನ್ನು ಮನ್ನಿಸಿ, ಸಮಾಜದ ಹಾಗೂ ಸೈನಿಕರ ಮಧ್ಯದ ಪರಸ್ಪರ ನಂಬಿಕೆ, ವಾತ್ಸಲ್ಯ ಮತ್ತು ಗೌರವದ ಶಾಶ್ವತ ಬಂಧನಕ್ಕೆ ವರ್ಣರಂಜಿತ ಸಮಾರಂಭ ಸಾಕ್ಷಿಯಾಯಿತು.
ಮರಾಠಾ ಎಲ್ಐಆರ್ಸಿಯ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ, ಎಸ್ಎಂ, ವಿಎಸ್ಎಂ, ಕುಟುಂಬ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ವೇದಾ ಉಪಾಧ್ಯ ಸೇರಿದಂತೆ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ಮರಾಠಾ ಲಘು ಪದಾತಿದಳದ ಹಿರಿಯ ಅಧಿಕಾರಿಗಳು ಹಾಗೂ ಧರ್ಮ ಪತ್ನಿಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಅನುಬಂಧ ಹಂಚಿಕೊಂಡರು.

ಈ ಸಂದರ್ಭದಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲಿನ 10 ಕ್ಕೂ ಹೆಚ್ಚು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ 238 ವಿದ್ಯಾರ್ಥಿನಿಯರು ಮತ್ತು ಮಹಿಳಾ ಶಿಕ್ಷಕರು, ಎನ್ಜಿಒಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಸೈನಿಕರಿಗೆ ರಾಖಿ ಕಟ್ಟುವುದರ ಮೂಲಕ ಗೌರವ ಸಮರ್ಪಿಸಿದರು.
ರಾಷ್ಟ್ರದ ರಕ್ಷಣೆಯ ಅಚಲ ಬದ್ಧತೆಗೆ ಪ್ರತಿಕವಾದ ಸಮಾರಂಭ, ಭಾರತೀಯ ಸೈನ್ಯದ ಧೈರ್ಯ, ತ್ಯಾಗ, ಸೇವೆ ಮತ್ತು ದೇಶಭಕ್ತಿಯ ಮೌಲ್ಯಗಳ ಕುರಿತು ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲರೊಂದಿಗೆ ಪರಸ್ಪರ ಸಂವಾದ ಸಮ್ಮೇಳನಕ್ಕೆ ಮೆರಗು ಕಲ್ಪಿಸಿತು.
***
ಈ ಲೇಖನ ಹಂಚಿಕೊಳ್ಳಿ