ಬ್ರೇಕಿಂಗ್
ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ 60 ಸಾವಿರ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮೂಲಕ ಪರ್ಯಾಯ ವ್ಯವಸ್ಥೆ : ಮುಖ್ಯಮಂತ್ರಿ ಕುಡಿಯುವ ನೀರಿನ ಸಮಸ್ಯೆಯ ನಿಭಾವಣೆಗೆ ಗ್ರಾಮೀಣ ಪ್ರದೇಶದ ಪ್ರತಿ‌ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೋಟಿ ಅನುದಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ ಸಾವಿರ ಕೋಟಿ ರೂಪಾಯಿ ಮೀಸಲು - ಡಿ.ಕೆ. ಶಿವಕುಮಾರ ಜನರ ಅಹವಾಲು ಪರಿಹರಿಸಲು ಪ್ರಜಾಸೇವಾ ಇಲಾಖೆ : ಪ್ರತ್ಯೇಕ ಮಂತ್ರಿಯೊಬ್ಬರ ನಿಯೋಜಿನೆ- ಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್ ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌   ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು; ಕೆಳ ಹಂತದ ೭ ಸೇತುವೆಗಳು ಜಲಾವೃತ್ತ ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ 60 ಸಾವಿರ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮೂಲಕ ಪರ್ಯಾಯ ವ್ಯವಸ್ಥೆ : ಮುಖ್ಯಮಂತ್ರಿ ಕುಡಿಯುವ ನೀರಿನ ಸಮಸ್ಯೆಯ ನಿಭಾವಣೆಗೆ ಗ್ರಾಮೀಣ ಪ್ರದೇಶದ ಪ್ರತಿ‌ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೋಟಿ ಅನುದಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ ಸಾವಿರ ಕೋಟಿ ರೂಪಾಯಿ ಮೀಸಲು - ಡಿ.ಕೆ. ಶಿವಕುಮಾರ ಜನರ ಅಹವಾಲು ಪರಿಹರಿಸಲು ಪ್ರಜಾಸೇವಾ ಇಲಾಖೆ : ಪ್ರತ್ಯೇಕ ಮಂತ್ರಿಯೊಬ್ಬರ ನಿಯೋಜಿನೆ- ಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್ ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌   ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು; ಕೆಳ ಹಂತದ ೭ ಸೇತುವೆಗಳು ಜಲಾವೃತ್ತ ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ
11 ಜುಲೈ 2026
ಶರಣರ ಅನುಭಾವ ದರ್ಶನ ಮಾಡಿದ ಫ.ಗು.ಹಳಕಟ್ಟಿ ಅಪ್ಪಟ ಶರಣ - ನೀಲಕಂಠ ಭೂಮಣ್ಣವರ
🎭 ಸಾಂಸ್ಕೃತಿಕ
Dr. K N Doddmani · · 180 ವೀಕ್ಷಣೆಗಳು

ಶರಣರ ಅನುಭಾವ ದರ್ಶನ ಮಾಡಿದ ಫ.ಗು.ಹಳಕಟ್ಟಿ ಅಪ್ಪಟ ಶರಣ - ನೀಲಕಂಠ ಭೂಮಣ್ಣವರ

ಅಸ್ಮಿತೆ ಸುದ್ದಿ : 12 ಶತಮಾನದ ಬಸವಣ್ಣಾದಿ ಶರಣರ ಅನುಭಾವ ತತ್ವ ದರ್ಶನದ ವಚನ ಸಂಪತ್ತನ್ನು ಸಂಪಾದಿಸಿ ಪ್ರಕಟಿಸಿದ ಡಾ. ಫ.ಗು. ಹಳಕಟ್ಟಿ ಅವರೂ ಒಬ್ಬ ಅಪ್ಪಟ ಶರಣ ಜೀವನ ನಡೆಸಿದವರು ಎಂದು ಪ್ರಾಧ್ಯಾಪಕ ನೀಲಕಂಠ ಭೂಮಣ್ಣವರ ಹೇಳಿದ್ದಾರೆ.

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿ ನಿಮಿತ್ತ ಬೆಳಗಾವಿಯ ಯುವ ಬರಹಗಾರರ ವೇದಿಕೆ ಮಾನವ ಬಂಧುತ್ವ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ.ಗು. ಹಳಕಟ್ಟಿಯವರು ಒಬ್ಬ ವಕೀಲರಾಗಿದ್ದುಕೊಂಡು ಆ ವೃತ್ತಿಯ ಮೂಲಕ ವೈಯಕ್ತಿಕ ಜೀವನಕ್ಕೆ ಬೇಕಾದ ಹಣ ಸಂಪತ್ತು ಗಳಿಸಬಹುದಿತ್ತು. ಆದರೆ, ತಮ್ಮ ಲೌಕಿಕ ಸುಖಾನುಭವವನ್ನು ತ್ಯಾಗ ಮಾಡಿ, ಶರಣರ ಜನಪರ ತತ್ವ ದರ್ಶನವನ್ನು ಜಾಗತಿಕ ವೇದಿಕೆಗೆ ತಂದುಕೊಡುವಲ್ಲಿ ಸ್ವತಃ ಶರಣ ಜೀವನ ಅನುಸರಿಸಿದರು ಎಂದು ತಿಳಿಸಿದರು.

ಶರಣರ ವಚನ ಕಟ್ಟುಗಳ ಸಂಗ್ರಹಕ್ಕಾಗಿ ಊರೂರು ಸಂಚರಿಸಿದರು. ವಚನಗಳ ಕಟ್ಟುಗಳನ್ನು ಪಡೆಯುವಲ್ಲಿ ಅಸಹನೀಯ ತೊಂದರೆ, ಅವಮಾನಗಳನ್ನು ಎದುರಿಸಿ ಸಂಗ್ರಹಿಸಿ ಸಂಪಾದಿಸಿದರು. ಪ್ರಕಟಣೆಯ ಮೂಲಕ ಬೆಳಕಿಗೆ ತರಲು ಸ್ವಂತ ಮನೆ, ಆಸ್ತಿಯನ್ನು ಅಡವಿಟ್ಟರು.‌ ತೀವ್ರ ಆರ್ಥಿಕ ತೊಂದರೆ ಅನುಭವಿಸಿದ ಹಳಕಟ್ಟಿ ಅವರು ಒಂದು ಹೊತ್ತಿನ ಊಟಕ್ಕೆ ಪರಿತಪಿಸಿದ್ದಾರೆ. ತೊಡಲು ಯೋಗ್ಯ ಬಟ್ಟೆಯಿಲ್ಲದೆ ಜೀವಿಸಿದ್ದಾರೆ. ಅವರ ಲೌಕಕಿ ಬದುಕಿನ ಸುಖಕ್ಕಿಂತ ಶರಣರ ವಚನ ಸಂಪತ್ತಿನ್ನು ಕಟ್ಟಿಕೊಡುವ ಅಧ್ಯಾತ್ಮ ದುಡಿಮೆ ಪ್ರಧಾನವಾಗಿತ್ತು ಎಂದು ತಿಳಿಸಿದರು.

ಎಂ ಎನ್ ಮಾವಿನ ಕಟ್ಟಿ ಮಾತನಾಡಿ ವಿಶ್ವ ಮಾನ್ಯತೆಯ ವಚನ ಸಾಹಿತ್ಯವನ್ನು ಹಳಕಟ್ಟಿ ಯವರು ಪರಿಚಯಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಯುವ ಬರದಾರ ವೇದಿಕೆ ಅಧ್ಯಕ್ಷ ಪ್ರೊ. ದ್ಯಾಮಣ್ಣ ಸೊಗಲದ ಎಲೆಮರೆಕಾಯಿಯಂತೆ ಯುವ ಬರಹಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವುದು ಯುವ ಬರಹಗಾರರ ವೇದಿಕೆಯ ಉದ್ದೇಶವಾಗಿದೆ. ಸಮಾಜಕ್ಕೆ ದೇಶಕ್ಕೆ ಸೇವೆ ನೀಡಿದ ಮಹಾನ್ ವ್ಯಕ್ತಿಗಳ ಆದರ್ಶ ಜೀವನ ಮತ್ತು ‌ಮೌಲ್ಯಗಳನ್ನು ಪರಿಚಯಿಸುವುದು ವೇದಿಕೆಯ ಪ್ರಧಾನ ಆಶಯವಾಗಿದೆ ಎಂದು ತಿಳಿಸಿದರು.

ಗಾಯಕ ಅಶೋಕ್ ಕಾಂಬಳೆ ವಚನ ಗಾಯನ ಮಾಡಿದರು.ರುದ್ರಪ್ಪ ಬಡಿಗೇರ್, ಸಿದ್ದರಾಮ್ ಸಿದ್ರಾಮನಿ,ಡಾ. ಹೊಂಬಯ್ಯ ಡಾ. ನಾಗರಾಜ್ ಮುರುಗೋಡ ಡಾ. ಮಂಜುನಾಥ್ ಡಾ. ಬಾಲಕೃಷ್ಣ ನಾಯಕ್ ಡಾ. ದೊಡ್ಡ ನಿಂಗಪ್ಪ ಗೋಳ ಡಾ. ಅಡಿವಪ್ಪ ಇಟ್ಟಿಗಿ ಡಾ. ಚಿಕ್ಮಟ್ ಡಾ. ನದಾಫ್ ಮೊದಲಾದವರು ಉಪಸ್ಥಿತರಿದ್ದರು

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಡಾ. ರಾಜಕುಮಾರ ಸಾಂ‍ಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ ಸಾಂಸ್ಕೃತಿಕ

ಡಾ. ರಾಜಕುಮಾರ ಸಾಂ‍ಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ

ಅಕ್ಷರ ಜಗತ್ತು, ಬುದ್ಧಿವಂತರ ವಲಯ ವಿರೋಧಿಸುತ್ತ ರಾಜ್‌ ಸಿನಿಮಾಗಳನ್ನು ವಿರೋಧಿಸುವುದರ ಮೂಲಕ ಅವರು ಕಟ್ಟಿಕೊಟ್ಟ ಸಾಂಸ್ಕೃತಿಕ ಚೇತನವನ್ನು ಕುಂದಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ  ನಿಜವಾದ ಪ್ರಜ್ಞಾವಂತ ಅಕ್ಷರ ಸಂಸ್ಕೃತಿ ಅವರ ಸಾಂಸ್ಕೃತಿಕ ಶಕ್ತಿಯವನ್ನು ಒಪ್ಪಿ ಅಪ್ಪಿಕೊಳ್ಳುವುದರ ಮೂಲಕ ಸುಮಾರು ೮೦ ಹೆಚ್ಚು ಅವರ ಕುರಿತು ಕೃತಿಗಳನ್ನು ನೀಡಿದೆ. ಇಷ್ಟೊಂದು ಕೃತಿಗಳು ಯಾವ ಕಲಾವಿದನಿಗೂ ಸಾಧ್ಯವಾಗಿಲ್ಲ.

Admin
ಶರಣರ ಬಯಲು ಸಿದ್ಧಾಂತವನ್ನು ಬಯಲಲ್ಲಿ ಬಯಲಾಗಿಸಿದ ಸಾವಿರ ಕಂಠಗಳು  ಸಾಂಸ್ಕೃತಿಕ

ಶರಣರ ಬಯಲು ಸಿದ್ಧಾಂತವನ್ನು ಬಯಲಲ್ಲಿ ಬಯಲಾಗಿಸಿದ ಸಾವಿರ ಕಂಠಗಳು

"ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ಸಾಂಕೇತಿಕತೆಯಾಗಿದೆ.  ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದ ಕತ್ತಲೆ ಆವರಿಸಿದೆ. ಇದಕ್ಕೆ ಬಸವಣ್ಣಾದಿ ಶರಣರ ಮನುಷ್ಯಪರವಾದ ಬೆಳಕು  ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ..."

Admin