ನಾಳೆ ರಾಯಬಾಗದಲ್ಲಿ ಶಿರೂರ ಶ್ರೀಶೈಲ ಅವರ ಪ್ರೀತಿ ಬಂಗಾರ ಕವನ ಸಂಕಲನ ಬಿಡುಗಡೆ
ಅಸ್ಮಿತೆ ಸುದ್ದಿ : ಕವಿ ಶಿರೂರ ಶ್ರೀಶೈಲ ವಿರಚಿತ "ಪ್ರೀತಿ ಬಂಗಾರ" ಕವನ ಸಂಕಲನ ನಾಳೆ ದಿ.4 ರಂದು ಮುಂಜಾನೆ 11 ಗಂಟೆಗೆ ರಾಯಬಾಗದ ದಾದಾಸಾಹೇಬ್ ಪಾಟೀಲ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರಣಯ ವಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಕ್ಷಕ ಗೋಕಾಕದ ಈಶ್ವರ ಮಮದಾಪೂರ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ವ ಕನ್ನಡ ಸಂಘದ ಸಂಸ್ಥಾಪಕ ಡಾ. ಕುಮಾರ ತಳವಾರ ಮುಖ್ಯ ಅತಿಥಿಗಳಾಗಿ, ಚಕೋರ ಸಾಹಿತ್ಯ ವೇದಿಕೆ ಸಂಚಾಲಕ ಶಿವರಾಜ್ ಅರಳಿ, ಅಧಿಕಾರಿ ಡಾ.ಎಸ್.ಎಮ್. ಪಾಟೀಲ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕ ಡಾ. ಪ್ರಶಾಂತ ಹೊತ್ತಗಿಮಠ, ಜನ ಜಾಗೃತಿ ವೇದಿಕೆ ಸದಸ್ಯ ಜಿನೇಂದ್ರ ಖೆಮಲಾಪುರೆ, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ತಾನಾಜಿ ಶಿರಗುಂಪಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನ್ಯಾಯವಾದಿ ಡಿ.ಎಚ್. ಯಲ್ಲಟ್ಟಿ ಕೃತಿ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ರಾಯಬಾಗ ಸಾಹಿತ್ಯ ಬಳಗ ಹಾಗೂ ಸಂಘಟನೆಗಳು ಮತ್ತು ಶಿರೂರಿನ ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಿಯೋಜಿಸಲಾಗಿದ್ದು, ಇದೇ ಉಚಿತ ಹೃದಯ ರೋಗ ತಪಾಸಣೆ ಆರೋಗ್ಯ ಕಾರ್ಯಕ್ರಮ ನಡೆಯಲಿದೆ.
***
ಈ ಲೇಖನ ಹಂಚಿಕೊಳ್ಳಿ