ಹಿಂಡಲ್ಕಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ: ಮಧ್ಯ ಪ್ರವೇಶಿಸಿ ತಕ್ಷಣ ಪರಿಹಾರ ಒದಗಿಸಿದ ಜಿಲ್ಲಾ ಆಡಳಿತ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಆಸೀಫ್ ಸೇಠ, ಬೆಳಗಾವಿ ಪೊಲೀಸ್ ಆಯುಕ್ತ ಬೊರಸೆ ಭೂಷಣ ಹಾಗೂ ಸಾವಿಗೀಡಾದ ಕುಟುಂಬ ವರ್ಗ, ಮುಖಂಡರು ಮತ್ತು ಕೆಲ ಗ್ರಾಮಸ್ಥರ ಸಮ್ಮುಖದಲ್ಲಿ ಈ ತೀರ್ಮಾಣ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಿಂಡಲ್ಕಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ: ತಕ್ಷಣ ಪರಿಹಾರ ಒದಗಿಸಿದ ಜಿಲ್ಲಾ ಆಡಳಿತ
ಬೆಳಗಾವಿಯ ಪ್ರಸಿದ್ಧ ಹಿಂಡಲ್ಕೋ ಕಂಪಿಯ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ಹತಾಶಯಗೊಂಡು ಅಲ್ಲಿಯ ನೌಕರ ಮುತ್ಯಾನಟ್ಟಿ ಗ್ರಾಮದ ಶಂಕರ ತಳವಾರ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಮುತ್ಯಾನಟ್ಟಿ ಗ್ರಾಮಸ್ಥರು ಬೀದಿಗಿಳಿದು ಹೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದಾಗ ತಕ್ಷಣ ಜಿಲ್ಲಾ ಆಡಳಿತ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಿ ಒಂದು ಹಂತದ ವರೆಗೆ ಯಶಸ್ವಿಯಾಗಿದೆ.
ಸಾವಿಗೀಡಾದ ಯುವಕನ ಇಬ್ಬರು ತಮ್ಮಂದಿರರಿಗೆ ತಕ್ಷಣ ಕಂಪನಿಯಲ್ಲಿ ಸೂಕ್ತ ಉದ್ಯೋಗ ಕಲ್ಪಿಸಬೇಕೆಂದು ತೀರ್ಮಾ ಣಿಸಿ ಉದ್ಯೋಗ ಪತ್ರವನ್ನು ನೀಡಲಾಗಿದೆ. ಮತ್ತು ಅರ್ಹತೆ ಮಾನದಂಡ ಮಾಡಿ ಉದ್ಯೋಗದಿಂದ ಹೊರಹಾಕದೆ ಖಾಯಂಗೊಳಿಸಬೇಕೆಂಬ ಒಪ್ಪಂದಕ್ಕೆ ಕಂಪನಿ ಒಪ್ಪಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸೇರಿದ ಸಾರ್ವಜನಿಕರ ಎದುರು ಬಹಿರಂಗ ಪಡಿಸಿದರು.
ಅದೇ ರೀತಿ ಸಾವಿಗೀಡಾದ ಯುವಕನ ಕುಟುಂಬ ವರ್ಗಕ್ಕೆ ಕಂಪನಿ ವತಿಯಿಂದ ಸೂಕ್ತ ಪರಿಹಾರ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ , ಶಾಸಕ ಆಸೀಫ್ ಸೇಠ ಅವರು ತಮ್ಮ ವೈಯಕ್ತಿಕ ನಿಧಿಯಿಂದ ಪರಿಹಾರ ಧನ ನೀಡುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಿಂಡಲ್ಕೋ ಕಂಪನಿಯ ಸುತ್ತಲಿನ ಐದು ಗ್ರಾಮಗಳಲ್ಲಿ ವಾಸಿಸುವ ಶೈಕ್ಷಣಿಕ ಅರ್ಹತೆ ಹೊಂದಿದೆ ಯುವಕರಿಗೂ ಕಂಪನಿಯಲ್ಲಿ ಸೂಕ್ತ ಉದ್ಯೋಗಾವಕಾಶ ದೊರೆಯಬೇಕೆಂಬ ಕಾರಣದಿಂದ ಯುವಕರ ಪಟ್ಟಿ ತಯಾರಿಸಲು ಸೂಚಿಸಲಾಗಿದೆ. ಪಟ್ಟಿ ತಯಾರಿಸಲು ಐದು ದಿನ ಕಾಲಾವಕಾಶ ನೀಡಲಾಗಿದ್ದು, ಪಟ್ಟಿ ಸಿದ್ಧತೆ ನಂತರ ಉದ್ಯೋಗ ನೀಡುವ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತೀರ್ಮಾಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಆಸೀಫ್ ಸೇಠ, ಬೆಳಗಾವಿ ಪೊಲೀಸ್ ಆಯುಕ್ತ ಬೊರಸೆ ಭೂಷಣ ಹಾಗೂ ಸಾವಿಗೀಡಾದ ಕುಟುಂಬ ವರ್ಗ, ಮುಖಂಡರು ಮತ್ತು ಕೆಲ ಗ್ರಾಮಸ್ಥರ ಸಮ್ಮುಖದಲ್ಲಿ ಈ ತೀರ್ಮಾಣ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಲೇಖನ ಹಂಚಿಕೊಳ್ಳಿ